Wednesday 13 July, 2011

ಸೀನನ ಅಕ್ಕಿ ಮುಡಿ ತಿರಿ ಮತ್ತು ಹರಿ ಪ್ರಸಾದ ನಾಡಿಗರು


ಆಫೀಸಿನ ಹೊರಹೋಗಲು ಒಂದು ಹೆಜ್ಜೆ ಇಟ್ಟಿದ್ದೆ ಅಷ್ಟೇ. ನನ್ನ ಕರವಾಣಿ ಗುರ್ರಾಯಿಸಿತು. ಹೊರಗಡೆಯ ಮಳೆಯನ್ನೂ ಗಮನಿಸದ ಹಾಗೆ ಹೊಸ ನಂಬರ್.
" ಹಿಲ್ಲೋ" 
ಸ್ವರ ಕೇಳುತ್ತಲೇ ಗೊತ್ತಾಯಿತು!!!   "ಸೀನ!!!"
"ಎನಪ್ಪಾ ಅಪರೂಪ"  ಅಂದೆ
"ನಿನ್ಮನೆ ಕಡೆನೇ ಬರ್ತಾ ಇದ್ದೆ ವಿಳಾಸ ಹೇಳು"  ಹೇಳಿದೆ. ಆತನೂ ಹತ್ತಿರದಲ್ಲೇ ಇದ್ದ.
ನೋಡುತ್ತೇನೆ ಮಳೆಯಲ್ಲೇ ನೆನೆಯುತ್ತಾ ಬರ್ತಾ ಇದ್ದಾನೆ ಕೈಯಲ್ಲೇ ಮಡಿಸಿದ ಕೊಡೆಯೂ ಇದೆ.
ಯಾಕಯ್ಯಾ? ಕೊಡೆ ಹಾಳಾಯ್ತಾ? ನನಗೆ ಹೇಳಿದ್ರೆ ಒಂದು ಮಳೆ ಕೋಟಾದರೂ ತಂದಿರ್ತಿದ್ದೀನಲ್ಲ? ಹತ್ತಿರದಲ್ಲೇ ಇತ್ತಲ್ಲಾ ನನ್ನ ಆಫೀಸು?
"ಅದೂ ಇದೆ ಈ ಬ್ಯಾಗಲ್ಲಿ!!!"
ಮತ್ತೆ ಯಾಕೋ? ಕೊಡೆನೂ ಇದೆ, ಮತ್ತೊಂದೂ ಇದೆ ಯಾವುದನ್ನೂ ಉಪಯೋಗಿಸಿಲ್ಲ?
ಬೇಜಾರಾಯ್ತು ಯಾರಮೇಲೆ ಬೆಂಗಳೂರ್ ಮೇಲಾ ಅಥವಾ ನನ್ನ ಮೇಲಾ?
ಎರಡೂ ಅಲ್ಲ ಮಳೆಯ ಮೇಲೆ? ಯಾಕೋ?
ಅಲ್ಲನಾ, ಯಂತ ಮರಾಯಾ ಬೆಂಗ್ಳೂರ್ ಮಳೆ ಅಂದರೆ ಹೊತ್ತಿಲ್ಲ ಗೊತ್ತಿಲ್ಲ!!! ಕೊಡೆ ಬಿಡಿಸೋದ್ರಲ್ಲಿ ನಾನು ಪೂರಾ ಒದ್ದೆ!! ಅಲ್ಲ ಸ್ವಲ್ಪ ಬಿಟ್ಟರಾತಿಲ್ವಾ?
ಸಿಟ್ಟೇ ಬಂತು. ಎಷ್ಟು ನೆನಸ್ತೆ ಕಾಂಬೋ,  ಅಂತೇಳಿ ಇನ್ನು ಬಿಡ್ಸಿದ್ರೇನು? ಬಿಟ್ಟರೇನು ಅಂತ ಹಾಗೇ ನೆನ್ಕೊಂಡು ಬಂದೆ.
"ಅಂದ ಹಾಗೇ ಯಾಕೋ ಈಕಡೆ?"
"ಯಾಕೆ ಬರ ಬಾರದಾ?"
"ಹಾಗಲ್ಲಪ್ಪಾ ಮಾತಿಗೆ ಕೇಳ್ದೆ."
"ಮೊನ್ನೆ ಮೊನ್ನೆ ನಾಡಿಗರು ಸಿಕ್ಕಿದ್ರು"
ಯಾರು?
"ಅದೇ ಸಂಪದದವರು"
ಎಲಾ  ಇವ್ನ, ನಾನು ಬೆಂಗಳೂರಿಗೆ ಬಂದು ನಾಲ್ಕು ವರ್ಷ ಆಯ್ತು ನನಗಿನ್ನೂ ಅವರ ಭೇಟಿಯ ಭಾಗ್ಯ ಸಿಕ್ಕಿಲ್ಲಾ, ಇವನಿಗೆ ಹೇಗೆ ಸಿಕ್ಕಿದರು?
ಅರೇ ಸಂಪದ ನಿಂಗೆ ಗೊತ್ತಾ?
ಗೊತ್ತಿಲ್ದೇ ಏನು ? ನಂಗೆ ಸಂಪದದ ಎಲ್ಲಾರೂ ಗೊತ್ತು!! ಏನು ನಾಲ್ಕ ಅಕ್ಷರ ಬರೆದ್ರೆ ಮಾತ್ರ ಗೊತ್ತಗೋದೊ ಅಂದ್ಕಂಡಿದ್ದೀಯಾ?
ಅದಿರಲಿ ಇನ್ನೊಂಸರಿ ಎಲ್ಲಾ ಕೇಳ್ತೇನೆ, ಈಗ ವಿಷಯ ಹೇಳು
ಅದೇಕಳೆದ ಸಾರಿ ಅವರು ಊರ ಕಡೆ ಬಂದು ಚೆನ್ನೆ ಮಣೆ ,ಮೊರ ಚರಿಗೆ, ಕಲ್ಲು ಬಾನಿ, ಕಲ್ಮರಿಗೆ, ಸಾಂಬಾರ್ ದಾನಿ ಎಲ್ಲಾ ಫಟ ತೆಕ್ಕೊಂಡ್ ಬಂದಿದ್ದರಲ್ಲ
( ಈ ತಿಂಗಳ ಕೃಷಿ ಸಂಪದ ನೋಡಿ) ಅದರಲ್ಲಿ ಅಕ್ಕಿ ಮುಡಿ ಮತ್ತು ತಿರಿ ಫಟಕ್ಕೆ ಸಿಕ್ಕಿರಲಿಲ್ಲ, ಅದಕ್ಕೇ ಇನ್ನೋದ್ಸಾರಿ ಬೆಂಗ್ಳೂರಿಗೆ ಬಂದ್ರೆ ಬಾ ಅಂದಿರಲ್ಲೆ ಅವರನ್ನು ಕರೀಲಿಕ್ಕೇ  ಬಂದಿದ್ದೆ.
...???? ಪುಣ್ಯ ಮತ್ತೊಮ್ಮೆ ಕರೆವಾಣಿ ಮಾತಾಡಿತು.
"ಸೀನನ ಧರ್ಮ ಪತ್ನಿ!!!           ಮಿಸ್ ಅಲ್ಲಾ ಮಿಸ್ಡ್  ಕಾಲ್
ನಾನು ಕರೆ ಮಾಡಿದೆ
" ಅಣ್ಣಾ ಅವರು ಅಲ್ಲೇ ಇದ್ದಾರೇನು"  ಎಲಾ ಏನ್ ಪರ್ಫೆಕ್ಟ್ ಟೈಮಿಂಗ್!!!    ಕೊಟ್ಟೆ ಸೀನಂಗೆ
 ಸರಿ ಬಿಡು, ಅಯ್ತು ಕಣೆ ಅನ್ನುವುದು ಮಾತ್ರ ಗೊತ್ತಾಯ್ತು.
 "ಏನಂತೆ ಕಳೆದ ಸಾರಿ ಕೊಟ್ಟ ಪೌಡರ್ ಬೇಕಂತಾ?  "
ಯಾರೋ ದುಬಾಯಿಂದ ಬಂದವರು ಕೊಟ್ಟ ಮೂರ್ನಾಲ್ಕು ಪೌಡರ್ ಡಬ್ಬಿ ಇತ್ತು ಅದನ್ನೇ ಕೊಟ್ಟಿದ್ದೆ ಊರ ಕಡೆ ಮೊನ್ನೆ  ಹೋದಾಗ..
 "ಅದರ ಮಾತೆತ್ತಬೇಡ ಎಲ್ಲಾ .. ಅದೇ  ಡಬ್ಬೀದು... ಹರಿ ಕಥೆ!!  ಏನಾಯ್ತು? ಅವ್ಳ ಹತ್ರೇ ಕೇಳು"
ಅದಕ್ಕೂ ನನ್ನ ಕರೆವಾಣಿಯದ್ದೇ ಖರ್ಚು...
"ಅದೇ ಕಳೆದ ಸಾರಿ ಕೊಟ್ರಲ್ಲ ಎಲ್ಲಿಗೆ ಹೋಗೂದಾದ್ರೂ ಅದೇ ಪೌಡರ್ ಇವ್ರಿಗೆ, ಚವ್ಣಿ ಜಂಬ್ ನಂಗಂತೂ ಅದ್ನ್ ಕಂಡ್ರ್ ಆತಿಲ್ಲೆ.
ಹಾಕ್ಕಂಬ್ದ್ ಅಂದ್ರೆ ಮುಕ್ಕಾಲ್ ಪಾಲು ನೆಲಕ್ಕೆ ಕಾಲ್ ಭಾಗ ಎದಿಗೆ. ಕಾಲೂರಿದರೆ ಜೊಯ್ ಜಾರುದು. ಮೊನ್ನೆ ಬಿದ್ದ ನಾನು ಸುಧಾರ್ಸ್ಕಂಬಕೆ ಹದ್ನೈದ್ ದಿನ ಅಯ್ತ್."
"ಆಯ್ತು ನಾನು ಅವ್ನಿಗೆ ಹೇಳ್ತೇನೆ"
"ಎಲ್ಲಿ ಹೇಳ್ತೀರಿ? ನಿನ್ನೆ ಅವರು ನಿಮ್ಮಲ್ಲಿಗೆ ಬರುವಾಗ ಪುನಹ.....
ಬೆಡ್ರೂಮಲ್ಲಿ ಬೇಡ ಅಂತ ಬಾಥ್ ರೂಮಿನ ಬಾಗ್ಲ ಇದಿರು ಬೇಸನ್ ಇತ್ತಲ್ಲ ಅಲ್ಲಿಟ್ಟಿದ್ದೆ  ಆ ಪೌಡರ್ ಡಬ್ಬೀನ!!!  ಮತ್ತೆ ಅದೇ ಹಣೇ ಬರಹ. ಆ ಪೌಡರ್ ಮೇಲೆ ಕಾಲಿಟ್ಟು ಬಿದ್ದೆ.. ಈ ಸಾರಿ ಏಳಲಿಕ್ಕೆ ಅಂತ ಹಿಡಿದ ಬೇಸನ್ ಕೂಡಾ ನನ್ನ ಮೇಲೇ ಬಿದ್ದು..... ಪುಣ್ಯಕ್ಕೆ ಪಕ್ಕದ ಮನೆಯೋರು ಆಸ್ಪತ್ರೆಗೆ ಸೇರ್ಸಿದ್ರು
ಇನ್ನ್ ಜನ್ಮದಲ್ಲೂ ತರಬೇಡಿ ಅಂತ ಹೇಳೋಕೇ ಕರೆ ಮಾಡಿದ್ದು.."

 ಮರು ನಿಮಿಷದಲ್ಲಿ ಇಬ್ಬರೂ ಕೆಂಪೇಗೌಡ ನಿಲ್ದಾಣದ ಕಡೆ ....

No comments: