Wednesday 13 July, 2011

ಸೀನನ ಬಜನೆ ರಾಮ ಮತ್ತು ತೊರ್ಕಿ ಸಪ್ಪು

ಸೀನನ ಬಜನೆ ರಾಮ ಮತ್ತು ತೊರ್ಕಿ ಸಪ್ಪು


 

ಕಳೆದ ಸಾರಿ ಬೆಂಗಳೂರಿಗೆ ಬಂದ ಸೀನ ನಿಂತ್ ಮೆಟ್ಟಿಗೇ*** ವಾಪಾಸ್ಸು ಹೋದದ್ದು ನಿಮಗೆ ಗೊತ್ತೇ ಇದೆಯಲ್ಲ,
ಅದಾದ ಒಂದೇ  ವಾರದಲ್ಲಿ ನನಗೆ    ಊರಿಗೆ ಹೋಗಬೇಕಾಯ್ತು.
ನನ್ನ ಕೆಲ್ಸ ಮುಗಿಸಿ ಸೀನನಲ್ಲಿಗೆ ಹೊರಟೆ. ಯಾಕೋ ಸೀನನ ಮನೆಯಲ್ಲಿ ನನಗೆ ಎಡವಟ್ಟೇ ಕಾಣಿಸಿತು.
" ಪಾರ್ಟಿಯಲ್ಲೇ ಎರಡು ಹೋಳಾಯ್ತಾ............??
ಅಂತಹಾ ದುಶ್ಮನ್ ಗಳಾದ ಅಂಬಾನಿ ಸಹೋದರರೇ ಒಟ್ಟಾಗ್ತಾ ಇದ್ದಾರೆ, ನೀವು ಹೀಗೆ......?"
ಮಾತು ಮುರಿದ ಸೀನ ಇಲ್ಲಪ್ಪಾ ಅಂತಹದ್ದೇನಿಲ್ಲ.. ಸುಮ್ಮನೆ."ಅಂದ
ಆಗ ಶೀನನ ಧರ್ಮ ಪತ್ನಿ ಸಿಡಿದಳು
 "ಇವ್ರಿಗೆ ಎಲ್ಲಾ ಹಾಂಗೇ ಬಿಡಿ, ಅದ ಆದದ್ದ ನಮ್ಮ್ ಮನಿಯಲ್ ಅಲ್ದಾ..? ಇವ್ರಿಗೇನ್ ಕಾಣಿ, ಇವ್ರ್ ಮನಿಯಗಾ ಆದ್ದ್? "
"ವಿಶಯ  ಏನ್ ಹೇಳಾ ಸೀನಾ, ಅಂವ ಹೇಳೂದಿಲ್ಲ ಅಂತ್ ಕಾಂತತ್ತ್, ನೀವ್ ಹೇಳಿ ಕಾಂಬೋ"
"ಪಿಣಿಯ ಭಾವ ಮೊನ್ನೆ ಬಂದಾಳಿಕೆ ಹೇಳ್ರ್
ಅಲ್ದೇ ನಮ್ಮ್ ಮನಿಗೆ ಯಾರೋ ಸ್ವಾಮಿ ಬಂದ್ ಝಂಡಾ ಹೂಡಿದ ಅಂಬ್ರ್ ಮರೇರೆ, ಅಂವ  ಎಲ್ಲಿಂದ ಬಂದ ಅಂತ ಯಾರಿಗೂ ಗೊತ್ತಿಲ್ಲೆ,  ಅಪ್ಪೈಯ್ಯನ್ನ್ ಅಮ್ಮನ್ನ ಎಂತ ಮದ್ದ್ ಹಾಕಿನೋ ಗೊತ್ತಿಲ್ಲೆ, ಇಪ್ಪತ್ನಾಲ್ಕು
ಘಂಟೆಯೂ  ಆ ಮನೆಹಾಳ್ ಸ್ವಾಮಿದೇ ಪೂಜೆ ಮಾಡ್ಕಂಡ್ ಇರ್ತ್ರ್ , ಗದ್ದೆ ಹೊಲ ತೋಟ ಎಲ್ಲ ಎಂತದ್ದೂ ಮಾಡ್ದೇ ಹಾಂಗೇ ಬಿದ್ಕಂಡಿತ್ತ್ , ಆ ಪೂಜೆ ಈಪೂಜೆ ಅಂದೇಳಿ ಸಿಕ್ಕಾ ಪಟ್ಟೆ ದುಡ್ಡ ಅವ್ರದ್ದ್ ಖಾಲಿ ಮಾಡತ್ರ್ , ಇವ್ರ ಪಾಪದೋರಲ್ದಾ, ಅವ್ನ್ ಹೇಳ್ದ್ ಹಾಂಗೇ ಮಾಡ್ತ್ರ ಅಂಬ್ರ್, ನಮ್ಗಂತೂ ಎಂತ್ ಮಾಡೂದಂತೆಳಿ ಗೊತ್ತಾತಿಲ್ಲೆ.
ಕೆಲ್ಸದೋರೆಲ್ಲಾ ಅವ್ರಿಗ್ ಸಿಕ್ಕದ್ದಷ್ಟ್ ಕಟ್ಕಂಡ್ ಹೋತ್ರ , ಇವ್ರಿಗ್ ಹೇಳ್ರೆ ಈ ಹಳ್ತಿನ್ ಕಾಲ್ದಲ್ ಮಾವ ಅತ್ತೆಗ್ ಯಾಕ ಮನಸ್ಸಿಗ್ ಬೇಜಾರ್ ಮಾಡ್ಕ್ ಅಂತ್ರ್ ಕಾಣಿ, ಪಿಣಿಯ ಭಾವ ಮೊನ್ನೆ ಬಂದಾಳಿಕೆ ಹೇಳ್ರ್ ಆ ಸ್ವಾಮಿ ಸರಿಯಿಲ್ಲೆ ಅಂಬ್ರ"

ನಾನೆಂದೆ" ಸೀನಾ ಹೌದಾ ಈಗ್ಳಿಕೆ ಇಂತ ಮನೆ ಹಾಳ ಸ್ವಾಮಿಯರ ಜಾಸ್ತಿಯಾರ್ ಮರಾಯಾ, ಎಂತದ್ದಾರೂ ನೀನ ಮಾಡ   ಕಂಬೋ"
" ನಂಗ್ ಎಂತ ಮಾಡೂಕಾತ್ತ್?" ಸೀನನ ಖಾಲಿ ನೋಟ.
ಯಾಕಾ ಬಜನೆ ರಾಮನ ಕಥಿ ನೆನಪ್ ಹೋಯ್ತನಾ? "

ಯಾರದ್..? ಕೇಳಿದಳು ಲಚಮಿ, ಅದೊಂದ್ ದೊಡ್ಡ ಕಥಿಯೇ.." 
ನಾನೂ ಸೀನ ಇಬ್ಬರು ಒಮ್ಮೆಲೇ ಕಾಲಯಾನದಲ್ಲೇ ಹಿಂದಕ್ಕೋಗಿ ಬಾಲ್ಯದಲ್ಲಿಳಿದೆವು

 "ಈ ಬಜನೆ ರಾಮ ಎಲ್ಲಿಂದ ಬೈಂದ ಮರಾಯರೇ"  ಕೇಳಿದ ಸೀನ.
"ನಂಗೆ ಯಾಕ, ಸ್ವತಹ ಶಾನುಭಾಗರಿಗೇ ಗೊತ್ತಿಲ್ಲ ಅಂಬ್ರು ಮರಾಯಾ"
"ಮೊದಲು ಸಣ್ಣಿಪ್ಪತ್ತಿಗೇ ದೇಶಾಂತರ ಹೋದ ನಾಯ್ಕರ ಮಗ ಅಂಬ್ರ ಹೌದಾ?" ಸೀನ
"ಹೌದಾ ಅಲ್ದಾ ಯಾರಿಗ್ ಗೊತ್ತಿತ್ತ್? ಅದೆಲ್ಲ ಇರ್ಲಿ ಈಗ ಶಾನಭಾಗರ ಮನೆಯಗೇ ಗಜ್ಜ್ ಹೊಯ್ದ ( ತಳವೂರಿ) ಇಪ್ಪದಾ ಮರಯಾ, ಅವ್ರಂತೂ ಎಂತದ್ದೂ ಹೇಳೋರಲ್ಲ, ಮಕ್ಕಳಿಗೆಲ್ಲಾ ಎಷ್ಟ್ ಕಷ್ಟ ಗೊತ್ತಿತ್ತಾ ನಿಂಗೆ? ಇಲ್ಲ್ ಶಾಲಿಗೋಪುಕೆ ತಡ ಆತ್ತ್, ಅಲ್ಲ್ ಇಂವ ಮಾಡಿ ಇಟ್ಟ ಬಿಸ್ನೀರೆಲ್ಲಾ ಖಾಲಿ ಮಾಡೂದಂಬ್ರ, ಆ ಬಜನೆ ಏನ್, ದರ್ಶನ ಏನ್ , ಎರಡ್ಮೂರ್ ತಿಂಗ್ಳಿಂದ ಎಲ್ಲರಿಗೂ ತಲೆ ಬಿಸಿ ಮಾಡ್ದ ಅಂಬ್ರ ಕಾಣ " ನಾನು.
"ಇರ್ಲಿ ಬಿಡಾ, ನಿಮ್ಮನೆಯಗ ಅಲ್ಲ ಅಲ್ದಾ ಅಂವ ಇದ್ದದ್ದ್ ,ಅಥವಾ ಶಾನ್ಭಾಗರಿಗೆ ಒಂದ್ ಚಂದದ ಮಗಳ ಇದ್ದ್ಲ್ ಅಂದೇಳಿಯಾ?" ಸೀನ.
"ಏಯ್ ಎಂತದ್ದೆಲ್ಲಾ ಹೇಳ್ಬೇಡ, ಪಾಪ ಏನಾರೂ ಒಂದ್ ಮಾಡ್ಕಲ್ಲೆ ಈಗ, ಅಂವನ್ ಅಲ್ಲಿಂದ ಓಡ್ಸೂಕೆ."
"ಸರಿ ಯಂತದ್ದಾರೂ ಮಾಡುವಾ  ನೀ ಬಿಡ, ನಾ ಕಂಡ್ಕಂತೆ ಅವನ ಕಥೆ"
ಸೀನ ಹೀಗೆ ಹೇಳಿದ ಅಂದರೆ ಖಂಡಿತಾ ಏನಾರೂ ಮಾಡೇ ಮಾಡ್ತಾನೆ.

ಸೀನ ಕೆಲ್ಸ ಆದಿನ ಸಂಜೆಲೇ ಶುರು ಅಯ್ತ, ಅಲ್ಲೆಲ್ಲಿಂದ್ಲೋ ಸೌತೆ ಹಣ್ಣು ತಕಂಡ ಬಂದ್ ನಂಗ್ ಕೊಟ್ಟ,
"ಇದೆಂತದ್ದಾ ಹಕ್ಲ್ ಸೌತೆ? ಯಂತಕ್ಕೆ ಇದ್?
ಇದ್ ಕಾಂಬಕೆ ಸರಿ ಇತ್ತ ಆದ್ರೆ ಇದ್ ಒಳ್ಗೆ ಕೊಳ್ತೋಯ್ತ್!( ಹಾಳಾಗಿ ಕೊಳೆತಿದೆ) ಇದನ್ನ ನಿಮ್ಮ ಮನೆಯಗೇ ಸೌತೆಕಾಯಿ ಕಟ್ಟು ಜಾಗದಗೆ ಕಟ್ಟ್, ಆ ರಾಮ ಕೂತ್ಕಂಬ್ ಜಾಗದಗೇ ಮೇಲ್ ಕಟ್ಟ್ಕ್ ಅಕ್ಕಾ?.
ಕಟ್ಟದ್ ಗಂಟ್ ಮಾತ್ರ ಒಯ್ಗಂಟ ಆಯಿರ್ಕ್. ಅದ್ರ ತುದಿಗೆ ಕಪ್ ನೂಲ್ ಕಟ್ಟಿ ಹೊರ್ಗೆ ಕಿಟ್ಕಿಲಿಡ್, ಮತ್ತೆಲ್ಲ ನಾ ಕಂಡ್ಕಂತೆ.
ಹಾಂಗೇ ಅಂವ ಅವ್ನ್ ಗಾಳಿಪಟ ಎಲ್ಲ್ ಒಣೂಕ್ ಹಾಕ್ತ?  ಗೊತ್ತಯಿಲ್ಲ್ಯ? ಅದೇ ಮರಯಾ ಅವ್ನ್ ಕಚ್ಚೆ?
ತೊಂಡಿ ಚಪ್ರದಗೆ ಅಲ್ದಾ? ಇನ್ನ್ ಬಿಡ ...
ಆತ ಅದೆಲ್ಲಿಂದ್ದೋ ತೊರ್ಕಿ ಸಪ್ಪು ತಂದು ರಾಮನ ಗಾಳಿಪಟಕ್ಕೆ( ಉದ್ದದ ಹಳೆ ಕಚ್ಚೆ )ಗೆ ಚೆನ್ನಾಗಿ ಹಚ್ಚಿದ.
( ಇಲ್ಲಿ ತೊರ್ಕಿ ಸಪ್ಪಿನ ವಿಷಯ ಹೇಳಬೇಕು, ಎಲೆಯ ಮೇಲೆ ಸಣ್ಣ ಸಣ್ಣ ಕೂದಲಿನಂತ ಎಳೆಗಳಿವೆ ಅವು ಎಲ್ಲೆಲ್ಲಿ ನಮ್ಮ ಚರ್ಮಕ್ಕೆ ತಾಗ್ತದೋ ಅಲ್ಲೆಲ್ಲ ಸಿಕ್ಕಾಪಟ್ಟೆ ತುರಿಯೆದ್ದು ಯಮಯಾತನೆ ಅನುಭವಿಸಬೇಕಾಗುತ್ತೆ)

 ಇನ್ನು ಕೊಳೆತ ಸೌತೆ ಕಾಯಿ ಭಯಂಕರ ವಾಸನೆಯದ್ದು ಅದು ತಲೆ ಮೇಲೆ ಬಿದ್ದರೆ ಆ ಅತಿ ಭಯಂಕರವಾದ ವಾಸನೆ ತೊಡೆಯಲು  ಆ ಪ್ರಾಣಿ ಸ್ನಾನ ಮಾಡಲೇ ಬೇಕು,
ಸ್ನಾನ ಮಾಡಿ ತೊಂಡೆ ಚಪ್ಪರಕ್ಕೆ ಬರಲೇ ಬೇಕಲ್ಲ  ..?

ನಂತರ ಬಜನೆ ರಾಮನ ಹೆಸರೇ ಇತಿಹಾಸವಾಯ್ತು.

ಇದೆಲ್ಲ ಹೇಳಿ ನಾನು ಸೀನ ಮತ್ತು ಲಚಮಿಯ ಮುಖ ನೋಡಿದೆ.ಲಚಮಿಯ ಮುಖದಲ್ಲೂ ಅರಾಧನೆಯ ನೋಟ,

"ಸರಿ ಯಂತದ್ದಾರೂ ಮಾಡುವಾ  ನೀ ಬಿಡ, ನಾ ಕಂಡ್ಕಂತೆ ಅವನ ಕಥೆ"

ಸೀನ ಹೀಗೆಂದ ಅಂದರೆ ಲಚಮಿಯ ಮನೆಯಲ್ಲಿ ಬಂದ ಸ್ವಾಮಿಗೂ ಗತಿಗೋತ್ರ ಇಲ್ದ್ ಕಾಲ ಬಂತ್ ಅಂತೇ ಅರ್ಥ.

No comments: